BRBNMPL ನಿಂದ ಸೇವಾಭಾರತಿ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

12.02.24 11:38 AM By sewabharathikanyadi

ಮೈಸೂರು (ಫೆ.05): ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್, ಮೈಸೂರು  ಇವರಿಂದ  2023-24 ನೇ ಸಾಲಿನ  ಸಿ. ಎಸ್. ಆರ್ ಅನುದಾನದಡಿಯಲ್ಲಿ ಸೇವಾಭಾರತಿ ಸಂಸ್ಥೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ  ಫೆಬ್ರವರಿ 05 ರಂದು ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್  ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್  ಸಂಸ್ಥೆಯ  ಸೀನಿಯರ್ ಜನರಲ್ ಮ್ಯಾನೇಜರ್    ಕೆ. ನಾರಾಯಣನ್ ರವರು ಆಂಬುಲೆನ್ಸ್ ಕೀ ಯನ್ನು ಸೇವಾಭಾರತಿ  ಸಂಸ್ಥೆಯ ಸೀನಿಯರ್ ಮ್ಯಾನೇಜರ್  ಚರಣ್ ಕುಮಾರ್ ಎಂ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ  ಸಿ. ಎಸ್. ಆರ್. ವಿಭಾಗದ ಜನರಲ್ ಮ್ಯಾನೇಜರ್ (pp)  ಪ್ರಮೋದ್ ಕುಮಾರ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ನ  ಹಿರಿಯ ಅಧಿಕಾರಿವರ್ಗದವರು ಉಪಸ್ಥಿತರಿದ್ದರು.

sewabharathikanyadi